ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ಸ್ಟಾಂಡಿನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ಗಳು, ಕ್ರಾಸ್ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ ನನಗೆ ಈ ಬೆಂಗಳೂರು ಪರಿಚಯವಾಗದೇ ಉಳಿದುಬಿಡುತ್ತಿತ್ತಾ? ಗೊತ್ತಿಲ್ಲ. ಪುಟ್ಟ ಮಗು ಕೈ ಹಿಡಿದು ನಡೆಯುವಂತೆ ನಾನು ಅವಳ ಕೈ ಹಿಡಿದು ನಡೆಯುತಿದ್ದರೆ ಅವಳು ಬೆಂಗಳೂರನ್ನು ಒಂದೊಂದಾಗಿ ತೋರಿಸುತ್ತಾ ಹೋಗುತ್ತಿದ್ದಳು. ನನ್ನ ಕಣ್ಣಲ್ಲಿ ಬೆರಗು, ಅವಳ ಕಣ್ಣಲ್ಲಿ ಸಾರ್ಥಕತೆ. ಬೆಂಗಳೂರಿನ ಬೀದಿಗಳನ್ನು ಸುತ್ತಿದ್ದೇ ಹಾಗೆ. ಸುತ್ತು ಹೊಡೆದು ಹೊಡೆದು ನಮ್ಮ ಕೊನೆಯ ನಿಲ್ದಾಣವಾಗುತ್ತಿದ್ದದ್ದು ಮಾತ್ರ ಕಲಾಕ್ಷೇತ್ರ. ಅಲ್ಲಿ ನಾನು ಅವಳು ಕುಳಿತು ನಾಟಕ ನೋಡುತ್ತಿದ್ದೆವು. ಪಾಪ್ ಕಾನರ್್ ತಿನ್ನುತ್ತಿದ್ದೆವು. ಕಡಲೆ ಕಾಯಿ ತಿನ್ನುತ್ತಿದ್ದೆವು. ನಮ್ಮ ಕೆಪಾಸಿಟಿ ಅಷ್ಟೆ ಆಗಿತ್ತು. ಒಮ್ಮೆಯೂ ಅವಳು ಐಸ್ಕ್ರೀಮ್ ಕೇಳಿದವಳಲ್ಲ. ಬಣ್ಣದ ಡ್ರೆಸ್ ಕೊಡಿಸೋ ಅಂತ ಹಟಕ್ಕೆ ಬಿದ್ದವಳಲ್ಲ. ಪಿಚ್ಚರ್ಗೋಗೋಣ ನಡೆಯೋ ಅಂತ ಕೈ ಹಿಡಿದು ಜಗ್ಗಿದವಳಲ್ಲ. ಅವಳು ಕೇಳಿದ್ದರೂ ನನಗೆ ಕೊಡಿಸುವ ತಾಕತ್ತಾದರೂ ಎಲ್ಲಿತ್ತು? ಅವಳೇ ಒಮ್ಮೆ ನಾನು ಊರಿಗೆ ಹೊರಟಾಗ ಐದು ರುಪಾಯಿನ ಕ್ಯಾಡ್ಬರೀಸ್ ಚಾಕ್ಲೆಟ್ ಕೊಡಿಸಿದ್ದಳು. ನಾನು ಅದನ್ನ ಪೆದ್ದುಪೆದ್ದಾಗಿ ಜತನದಿಂದ ಜೇಬಿನಲ್ಲೇ ಇಟ್ಟುಕೊಳ್ಳಲು ಹೋಗಿ ಮೈಸೂರು ತಲಪುವಷ್ಟರಲ್ಲಿ ಪಾಯಸದಂತಾಗಿತ್ತು.
ಇರಲಿ... ಆ ದಿನಗಳಲ್ಲಿ ನಾನು ಓಆರ್ಜಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ದಿನಕ್ಕೆ ತೊಂಬತ್ತು ರುಪಾಯಿ ಸಂಬಳ ಪ್ಲಸ್ ಇನ್ನೊಂದಿಷ್ಟು ಅದಕ್ಕೆ ಇದಕ್ಕೆ ಅಂತ ಸಿಗುತ್ತಿತ್ತು. ಯೂನಿಸೆಫ್ನವರ ಮಿಡ್ಡೇ ಮೀಲ್ ಬಗೆಗಿನ ಸವರ್ೆ ಅದು. ಗೆಳೆಯ ಶ್ರೀನಿವಾಸ್ನ ಗಿರಿನಗರದ ರೂಮಿನಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದೆ. ಹೊರಗೆ ಹೋದ್ರೆ ತಿಂಗಳುಗಟ್ಲೆ ಬರ್ತಿರಲಿಲ್ಲವಾದ್ದರಿಂದ ವಸತಿ ಸಮಸ್ಯೆ ಅಷ್ಟಿರಲಿಲ್ಲ. ಆದ್ರೂ ಇರಲಿ ಅಂತ ನಾನು ಗೆಳೆಯ ಹನೀಫ್ ಸೇರಿ ವಿಜಯನಗರದಲ್ಲೊಂದು ರೂಮ್ ಮಾಡಿದ್ವಿ. ಆ ರೂಮಿನ ಬಗ್ಗೆ ಬರೆದರೆ ಅದೇ ಒಂದು ಖಾಸ್ಬಾತ್ ಆದೀತು. ಅದನ್ನು ಮತ್ಯಾವಗಾದರು ಹೇಳ್ತೇನೆ.ಇಂಥ ಸಮಯದಲ್ಲಿ ನನ್ನಲ್ಲಿ ಕಾಸಿಗೆ ಬರ. ರೂಮ್ ಏನೋ ಕಷ್ಟ ಪಟ್ಟು ಮಾಡಿದ್ದೆ. ಆದ್ರೆ ಅಡುಗೆ? ಸ್ಟವ್ ಇಲ್ಲ. ಸೀಮೆ ಎಣ್ಣೆ ಇಲ್ಲ. ಹಾಸಿಕೊಳ್ಳಲು ನೆಟ್ಟಗೊಂದು ಚಾಪೆಯೂ ಇಲ್ಲ. ಹನೀಫ ರೂಮಿನಲ್ಲಿರುತ್ತಿದ್ದದ್ದೇ ಅಪರೂಪವಾದ್ದರಿಂದ ಅವನ ಚಾಪೆಯನ್ನೇ ನಾನು ಬಳಸಿಕೊಳ್ಳುತ್ತಿದ್ದೆ.ಆದ್ರೆ ಅಡುಗೆಗೆ ಏನು ಮಾಡುವುದು?ಒಮ್ಮೆ ಸವರ್ೆಗೆ ಟೀಮ್ ಸೆಲೆಕ್ಟ್ ಮಾಡುವ ಇಂಟರ್ ವ್ಯೂ ಇತ್ತು. ಎಲ್ಲೆಲ್ಲಿಂದಲೋ ಹುಡುಗ್ರು ಬಂದಿದ್ರು. ಅದರಲ್ಲೊಬ್ಬ ಹುಡುಗನ ಪರಿಚಯವಾಯಿತು. ಬೆಂಗಳೂರಿನವನೇ. ತುಂಬಾ ಆತ್ಮೀಯತೆಯಿಂದ ಮಾತಾಡಿಸಿದ. ಅದೂ ಇದು ಮಾತಾಡುತ್ತಾ ವಿಷಯ ಬದುಕಿನತ್ತ ಹೊರಳಿತು. ನನ್ನ ಪರಿಸ್ಥಿತಿ ಕೇಳಿ... ಅಯ್ಯೋ ಬನ್ನಿ ನಮ್ ಮನೆಗೆ ಅಂತ ಕರೆದೋಯ್ದ. ಅವನು ಕರೆದುಕೊಂಡು ಹೋದ ಏರಿಯಾ ಕೂಡ ನನಗೆ ನೆನಪಿಲ್ಲ. ಅವತ್ತು ಅವನ ಮನೆಯಲ್ಲಿ ಯಾರೂ ಇರಲಿಲ್ಲ. ಹೋದವನೆ ಅದೆಲ್ಲಿಟ್ಟಿದ್ದನೋ ಅಟ್ಟದ ಮೇಲಿದ್ದ ಒಂದು ಸ್ಟವ್ ತೆಗೆದು ಕೊಟ್ಟ. ಬತ್ತಿ ಸ್ಟವ್ ಅದು. ನಾನು ಸಂಕೋಚದಿಂದ ಬೇಡ ಅಂದೆ. ಇರಲಿ ತಗೊಳಿ ಅಂದ. ಬೇಡವೆಂದರೂ ಊಟ ಹಾಕಿದ. ನಾಳೆ ಸಿಕ್ತೇನೆ ಅಂತ ಬೀಳ್ಕೊಟ್ಟ.
ನಿಜ್ಜ ಹೇಳ್ಲ ಅದೇ ಸ್ಟವ್ನಿಂದಲೇ ನಾನು ಸುಮಾರು ದಿವಸ ಅನ್ನ ಬೇಯಿಸಿಕೊಂಡು ತಿಂದದ್ದು. ಟೊಮ್ಯಾಟೋ ಗೊಜ್ಜು ಮಾಡಿಕೊಂಡಿದ್ದು. ಬಿಸಿ ಬಿಸಿ ಆಮ್ಲೆಟ್ ಹಾಕಿಕೊಂಡಿದ್ದು. ಅವತ್ತು ಭೇಟಿಯಾದ ಆ ಗೆಳೆಯ ಮಾರನೆ ದಿನದಿಂದಲೇ ಕೆಲಸಕ್ಕೆ ಬರಲಿಲ್ಲ. ಸ್ಯಾಲರಿ ಸಾಲಲಿಲ್ಲವೋ ಮತ್ತಿನ್ನೇನೋ. ಅವತ್ತೇ ನಾವೆಲ್ಲ ಬಿಜಾಪುರಕ್ಕೆ ಹೊರಟು ಹೋದ್ವಿ. ಬರೋಬ್ಬರಿ ಒಂದೂವರೆ ತಿಂಗಳ ಸವರ್ೆ ಅದು. ಅವನ ಮುಖ ಮತ್ತೆ ನಾನು ನೋಡಲಿಲ್ಲ. ಆದ್ರೆ ಅವನು ಕೊಟ್ಟ ಆ ಸ್ಟವ್ ಮಾತ್ರ ನನ್ನಲ್ಲಿ ತುಂಬಾ ಕಾಲ ಉಳಿದಿತ್ತು.
ಬದುಕಿನ ಪಥದಲ್ಲಿ ಯಾರ್ಯಾರೋ ಎಲ್ಲೆಲ್ಲಿಂದಲೋ ಬಂದು ಸಹಾಯ ಮಾಡಿಬಿಡುತ್ತಾರೆ. ಅಂಥವರಿಂದಲೇ ಅಲ್ಲವೇ ಬದುಕು ಅವುಡುಗಚ್ಚಿ ಚಿಗಿತುಕೊಳ್ಳುತ್ತಾ ಹೋಗುವುದು. ಅವೆಲ್ಲ ಸಣ್ಣ ಸಣ್ಣ ಸಹಾಯಗಳಿರಬಹುದು. ಆದ್ರೆ ಇಡೀ ದಾರಿ ಸುಗಮವಾಗಿದ್ದು ಮಾತ್ರ ಅವರೆಲ್ಲರಿಂದಲೇ ಅನ್ನುವುದನ್ನ ಮರೆಯಬಾರದು.
ಯಾಕೋ ಇವತ್ತು ಬರೆಯುತ್ತಾ ಕುಳಿತವನಿಗೆ ಇದೆಲ್ಲ ನೆನಪಾಯಿತು.
Monday, May 5, 2008
ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ...
Saturday, April 26, 2008
ಅಕ್ಕ ಹೇಳಿದ ಕುಡುಕನ ಪ್ರಸಂಗ...
Monday, April 21, 2008
ಎಂಟು ವರ್ಷಗಳ ನಂತರ ಒಡಮೂಡಿದ ಈ ಕವಿತೆ ...
ನಾನು ಹಾಗೇ!
ನಾನು ಹಾಗೇ!
ನಾನು ಹಾಗೇ!
ನಾನು ಹಾಗೇ!
ನಾನು ಹಾಗೇ!
ನಾನು ಹಾಗೇ!
ನಾನು ಹೇಳಬೇಕೆಂದ್ರೆ,
Saturday, April 19, 2008
ಪ್ರೀತಿಗೊಂದು ಕಾರಣ ಕೊಡೋ?
Friday, April 18, 2008
ಒಂದು ಮಜಬೂತಾದ ಕತೆ ಹಿಡಿದುಕೊಂಡು ಕುಳಿತ ...
ಯಾಕೋ ಗೊತ್ತಿಲ್ಲ ಒಂದು ಫಿಲ್ಮ್ ತೆಗೀಬೇಕು ಅನ್ನೋ ಆಸೆ ಇತ್ತೀಚೆಗೆ ಬಲವಾಗಿ ಕಾಡತೊಡಗಿದೆ. ಅದ್ಭುತವಾದೊಂದು ಕಥೆ ರೆಡಿ ಮಾಡಿಟ್ಟುಕೊಂಡಿದ್ದೇನೆ. ಅದು ಎಂಥ ಕತೆ ಎಂದ್ರೆ ಅದನ್ನು ಗೆಳೆಯನಿಗೆ ಮೊನ್ನೆ ಕೂರಿಸಿಕೊಂಡು ಹೇಳುತ್ತಾ ಹೋದೆ. ಅದನ್ನು ನಾನು ಹೇಳಿ ಮುಗಿಸೋ ಅಷ್ಟರಲ್ಲಿ ಅವನು ತುಂಬಾ ಭಾವುಕನಾಗಿದ್ದ. ಆ ಕಥೆಯ ಹಂದರವೇ ಹಾಗಿದೆ. ಸಣ್ಣ ಸಣ್ಣ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಡುವ ಪ್ರಯತ್ನ ಅದು.
ಕಮಷರ್ಿಯಲ್ ಆಗಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಮಜಬೂತಾದ ಕತೆ ಅದು.ನನಗೆ ಟೆಕ್ನಿಕಲ್ ಸೈಡ್ ಗೊತ್ತಿಲ್ಲದಿರಬಹುದು. ಆದ್ರೆ ಒಂದು ಫಿಲ್ಮ್ ಹೇಗಿರಬೇಕು ಅನ್ನೋದನ್ನ ಅದ್ಭುತವಾಗಿ ವéಿಷುವಲೈಸ್ ಮಾಡೋ ಅಷ್ಟು ಕಲ್ಪನೆ ನನಗಿದೆ. ಒಮ್ಮೊಮ್ಮೆ ಈ ಎಲ್ಲ ಕೆಲಸ ಬಿಟ್ಟು ಫಿಲ್ಮ್ ದಾರಿ ಹಿಡಿದುಬಿಡೋಣವೇ ಅನ್ನಿಸುತ್ತೆ. ಹಾಗಂದುಕೊಂಡ ಮರುಕ್ಷಣವೇ ಹಾಗೆಲ್ಲ ಮಾಡಿಗೀಡಿಯೇ ಮಗನೇ ಅಂತ ಮನಸ್ಸು ಕೈ ಹಿಡಿದು ಜಗ್ಗುತ್ತೆ.ಹಾಗೆ ನೋಡಿದರೆ ಈ ಫಿಲ್ಮ್ ಹುಚ್ಚು ನನಗೆ ಹೊಸದೇನಲ್ಲ. ನನ್ನ ಕಾಲೇಜಿನ ದಿನಗಳಲ್ಲಿಯೇ ನನಗೆ ಅಂಥದ್ದೊಂದು ಹುಚ್ಚು ತೀವ್ರವಾಗಿತ್ತು. ಗೆಳೆಯರೆಲ್ಲ ಸೇರಿ ಸಾರ್ ಇವನು ಫಿಲ್ಮ್ ಡೈರೆಕ್ಡ್ ಮಾಡಬೇಕಂತೆ...ಇನ್ಸ್ಟಿಟ್ಯೂಟ್ಗೆ ಸೇರಿಸಿಕೊಳ್ಳಿ ಸಾರ್ ಅಂತ ನಂಜರಾಜೇ ಅರಸ್ಗೆ ದುಂಬಾಲು ಬೀಳುತ್ತಿದ್ದರು. ಅವರು ಆಗತಾನೆ ಮೈಸೂರು ಯೂನಿವಸರ್ಿಟಿಯಲ್ಲಿ ಆರಂಭವಾಗಿದ್ದ ಫಿಲ್ಮ್ ಇನ್ಸ್ಟಿಟ್ಯೂಟ್ನ ಛೀಫ್ ಆಗಿದ್ದರು. ಅದಕ್ಕೆ ಅವರು ಎಷ್ಟು ಎಕರೆ ಜಮೀನು ಇಟ್ಟಿದ್ದೀಯಯ್ಯ ...ಮಾರಿಬಿಟ್ಟು ಬಾ ನಿನ್ನನ್ನೇ ಹೀರೋ ಮಾಡ್ತೀನಿ... ಅಂತ ರೇಗಿಸ್ತಿದ್ದರು. ಒಮ್ಮೆ ಅವರು ಒಂದು ಫಿಲ್ಮ್ ಶುರು ಮಾಡಿದ್ದು ನೆನಪಿದೆ. ಹೆಸರು ಮರೆತುಹೋಗಿದೆ. ಕುಕ್ಕರಹಳ್ಳಿ ಕೆರೆಯ ಮೇಲೆ ಕುಳಿತಿದ್ದ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಆವರ ಫಿಲ್ಮ್ನ ಎಲ್ಲಾ ಹಾಡುಗಳನ್ನು ಕೇಳಿಸಿದ್ದರು. ಹಂಸಲೇಖ ಕಾಸ್ಟ್ಲೀ ಕಣಯ್ಯಾ ಅದಕ್ಕೆ ಬೇರೊಬ್ಬನ ಹತ್ತಿರ ಮಾಡಿಸಿದ್ದೀನಿ ಅಂದಿದ್ದರು. ನಿಜಕ್ಕೂ ಆ ಹಾಡುಗಳು ತುಂಬಾ ಚೆನ್ನಾಗಿದ್ದವು. ಅದಾದ ಮೇಲೆ ನಾನೂ ಬೆಂಗಳೂರಿನ ಸೆರಗು ಹಿಡಿದು ಬಂದುಬಿಟ್ಟೆ. ಅವರ ಆ ಫಿಲ್ಮ್ ಏನಾಯಿತೋ ಗೊತ್ತೇ ಆಗಲಿಲ್ಲ.ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ದಾರಿ ಹಿಡಿದ ಮೇಲೆ ಟೈಮ್ ಅನ್ನೋದು ಹುರಕ್ಕೊಂಡು ಮುಕ್ಕತೊಡಗಿತು. ಅದರ ಗುಂಗಿನಲ್ಲೇ ಮುಳುಗಿಹೋದೆ. ಈಗ ಮತ್ತೆ ಫಿಲ್ಮ್ರಂಗಕ್ಕಿಳಿಯುವ ಆಸೆ ಗರಿಕೆದರಿ ಕೂತಿದೆ.
ಆ ಕ್ಷಣ ಎಂದೋ ಯಾವತ್ತೋ . ಗೊತ್ತಿಲ್ಲ.
Thursday, April 17, 2008
...ಇದು ಕಸಮ್
ತುಂಬಾ ದಿವಸದಿಂದ ನೀವು ಬ್ಲಾಗ್ನಲ್ಲಿ ಏನೂ ಬರೆದಿಲ್ಲ.ಈ ಹುಚ್ಚಾಟಕ್ಕೇಕೆ ಬ್ಲಾಗ್ ಶುರು ಮಾಡಬೇಕಿತ್ತು ಅಂತ ಗೆಳೆಯರು ಕೊರಳ ಪಟ್ಟಿ ಹಿಡಿದುಕೊಂಡು ಕೇಳುತ್ತಿದ್ದಾರೆ. ಏನು ಉತ್ತರಿಸಲಿ?
ಅಷ್ಟೊಂದು ಕೆಲಸ ಹಚ್ಚಿಕೊಂಡುಬಿಟ್ಟಿದ್ದೇನೆ. ದಿನಕ್ಕೆ ಹದಿಮೂರು ಹದಿನಾಲ್ಕೋ ಗಂಟೆ ದುಡಿಯುವುದು ನನಗೆ ಮೊದಲಿನಿಂದಲೂ ಅಭ್ಯಾಸವಾಗಿ ಹೋಗಿದೆ. ಕೆಲಸಕ್ಕೆ ಅಂತ ನಾನು ಯಾವತ್ತೂ ಹಿಂಜರಿದವನಲ್ಲ... ಹೇಳಬೇಕೆಂದ್ರೆ ಕೆಲಸ ಇಲ್ಲದೆ ಸುಮ್ನೆ ಕೂರುವುದು ಅಂದ್ರೆ ನನಗೆ ಪರಮ ಬೋರಿನ ಕೆಲಸ. ಅದಕ್ಕಿಂತ ಬೇಜಾರಿನ ಸಂಗತಿ ಇನ್ನೊಂದಿಲ್ಲ. ಹಾಗಾಗಿ ಖಾಲಿ ಅನಸಿದಾಗಲೆಲ್ಲ ನಾನೇ ಏನಾದ್ರೂ ಕೆಲಸ ಸೃಷ್ಟಿಸಿಕೊಂಡುಬಿಡುತ್ತೇನೆ. ಅದರಿಂದ ಸಿಗುವ ಖುಷಿ ಇದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲು.ಈ ನಡುವೆ ಒಂದು ಹೊಸ ವಿಷಯ ಅಂದ್ರೆ ಕಾರು ತಗೊಂಡಿದ್ದು. ತುಂಬಾ ದಿನದಿಂದ ಆ ಬಯಕೆ ಇತ್ತು. ತಗೊಳ್ಳುವುದಾದ್ರೆ ಅದು ಕಾರೇ ಅಂತ ನಾನು ಯಾವಾಗಲೋ ಡಿಸೈಡ್ ಮಾಡಿಬಿಟ್ಟಿದ್ದೆ. ಈಗ ಆ ಕನಸು ಕೈ ಗೂಡಿದೆ. ಒಂಥರ ಹ್ಯಾಪಿ. ಆದ್ರೆ ಬಡ್ಡೀ ಮಗಂದು ಡ್ರೈವಿಂಗು ಇದೆಯಲ್ಲ ಅದು ಮಾತ್ರ ಬೆಂಗಳೂರಿನಲ್ಲಿ ನರಕವೇ! ಸುಮ್ಮನೆ ಆರಾಮಾಗಿ ಫ್ರೆಂಡ್ ಕಾರಿನಲ್ಲಿ ಕುಳಿತು ಹರಟೆ ಕೊಚ್ಚುತ್ತಾ ಹೋಗುತ್ತಿದ್ದವನು ಗಾಡಿ ತಗೊಂಡು ರಸ್ತೆಗಿಳಿದ ಮೇಲೆ ಗೊತ್ತಾಗಿದ್ದು, ಅದರ ಕಷ್ಟ ಏನೂ ಅಂತ. ಮೊನ್ನೆ ರಿಂಗ್ ರೋಡಿನ ದಿಬ್ಬವೊಂದರಲ್ಲಿ ಗಾಡಿ ಇದ್ದಕ್ಕಿದ್ದಂತೆ ಆಫ್ ಆಗಿ ಹೋಯಿತು. ಎಂಥ ಫಜೀತಿ ಅಂದ್ರೆ ಹಿಂದೆ ಇದ್ದವರೆಲ್ಲ ಹಾರ್ನ್ ಊದಿದ್ದೇ ಊದಿದ್ದು. ಟ್ರಾಫಿಕ್ ಪೊಲೀಸ್ ಬಂದು ಕಲಿಯೋದಿದ್ದರೆ ಮೈದಾನಕ್ಕೋಗಿ ಕಲೀರ್ರಿ... ರಸ್ತೆಗ್ಯಾಕ್ ಬಂದು ಪ್ರಾಣ ಹಿಂಡ್ತೀರಿ ಅಂತ ಉಗಿದು ಹೋದ. ಅವತ್ತು ನಿಜಕ್ಕೂ ನಾನು ನರ್ವಸ್ ಆಗಿಬಿಟ್ಟಿದ್ದೆ.ಆದ್ರೆ ಈ ಫ್ರೆಂಡ್ಸ್ ಇದಾರಲ್ಲ ಇವರ ಕಿತಾಪತಿ ಒಂದೊಂದಲ್ಲ. ಕಾರ್ ತಗೋ ಅಂತಿದ್ದವರೇ ಈಗ ಬನ್ರೋ ಕೂರ್ರೀ ಅಂದ್ರೆ ನಾವು ಬರೊಲ್ಲಪ್ಪ ಅಂತ ಕೈ ಎತ್ತುತ್ತಿದ್ದಾರೆ. ಇರೋದೊಂದೇ ಜೀವ ಅದನ್ನೂ ನಿನ್ನ ಕೈಲಿ ಕೊಟ್ಟು ಕಳಕೊಳ್ಳೋಕೆ ನಮಗೇನು ಹುಚ್ಚಾ ಅನ್ನೋ ಥರಾನೆ ಎಲ್ಲರೂ ಮಾತಾಡ್ತಿದಾರೆ. ಇದೆಲ್ಲ ಎಷ್ಟು ದಿನ ಅಂತ ನಾನೂ ಸುಮ್ಮನಿದ್ದುಬಿಟ್ಟಿದ್ದೇನೆ.ಈ ನಡುವೆ ನನ್ನ ಮೊದಲ ಕಥಾ ಸಂಕಲನ ಸಿದ್ಧಗೊಳ್ಳುತ್ತಿದೆ. ತುಂಬಾ ಪಾಪ್ಯುಲರ್ ಆಗಿದ್ದ ಅಂಕಣ ಇನ್ಬಾಕ್ಸ್. ಅದನ್ನು ಕೂಡ ಪುಟ್ಟ ಪುಸ್ತಕ ಮಾಡಬೇಕೆಂದುಕೊಂಡಿದ್ದೇನೆ. ಏನೇ ಅದರೂ ಈ ವರ್ಷ ನನ್ನದೂ ಅಂತ ಒಂದಿಷ್ಟು ಪುಸ್ತಕ ಬರಲೇ ಬೇಕು ಅಂದುಕೊಂಡಿದ್ದೇನೆ.ಅದರ ಬಿಡುಗಡೆಗೆ ನೀವಿಲ್ಲದೇ ಹೋದ್ರೆ ಆದೀತೆ. ಖಂಡಿತಾ ಕರೀತೀನಿ ಬಿಡಿ. ಹಾಗೆ ನದಿಪ್ರೀತಿ ಇನ್ನು ಸಣ್ಣದಾಗಿಯಾದರು ಹರಿಯುತ್ತದೆ
... ಇದು ಕಸಮ್.







